Slide
Slide
Slide
previous arrow
next arrow

ಕ್ಯಾಂಪ್ಕೋ ಉತ್ತುಂಗ ಸ್ಥಿತಿಯಲ್ಲಿರಲು ರೈತರೇ ಮುಖ್ಯ ಕಾರಣ: ಕಿಶೋರ್‌‌ಕುಮಾರ್ ಕೊಡ್ಗಿ

300x250 AD

ಹೊನ್ನಾವರ: ರೈತರಿಂದ ಬೆಳೆಗಳನ್ನು ಖರೀದಿ ಮಾಡುವ ಜೊತೆ ವಿವಿಧ ಸೌಲಭ್ಯಗಳನ್ನು ನೀಡುತ್ತಾ ಬಂದಿರುವ ಕ್ಯಾಂಪ್ಕೋ ಇಂದು ಉತ್ತುಂಗ ಸ್ಥಿತಿಯಲ್ಲಿರಲು ರೈತರು ಮುಖ್ಯ ಕಾರಣ ಎಂದು ಕ್ಯಾಂಪ್ಕೋ ನಿಯಮಿತ ಮಂಗಳೂರು ಇದರ ಅಧ್ಯಕ್ಷ  ಎ. ಕಿಶೋರ್ ಅಭಿಪ್ರಾಯಪಟ್ಟರು.

ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಕೇಂದ್ರ ಅಡಿಕೆ ಮತ್ತು ಕ್ಯಾಂಪೋ ನಿಯಮಿತ ಮಂಗಳೂರು ಮತ್ತು ಪರಿಷ್ಕರಣಾ ಸಹಕಾರಿ ನಿಗಮದ ಹೊನ್ನಾವರ ಶಾಖೆಯಿಂದ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಡಿಕೆ ಬೆಳೆಗಾರರು ಬೆಂಬಲಕ್ಕೆ ನಿಲ್ಲುವ ಜೊತೆ ರೈತರಿಗೆ ಹಲವು ಸೌಲಭ್ಯವನ್ನು ಕ್ಯಾಂಪ್ಕೋ ನೀಡಿ ಬೆಳೆಗಾರರನ್ನು ಉತ್ತೇಜನ ನೀಡುತ್ತಿದೆ. ರೈತರಿಂದ ಗುಣಮಟ್ಟದ ಬೆಳೆ ನೀಡುವ ಮೂಲಕ ಖರೀದಿ ಮಾಡಿ ವಿಶ್ವಾಸ ಉಳಿಸಿಕೊಂಡಿದೆ. ಸಭೆಯಿಂದ ಈ ಭಾಗದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆತಿದ್ದು, ಸರ್ಕಾರದ ಮಟ್ಟದಿಂದ ಬಗೆಹರಿಯಬಹುದಾದ ಸಮಸ್ಯೆಗಳಿಗೆ ಸಚಿವರು, ಸಂಸದರು, ಶಾಸಕರಿಗೆ ಪತ್ರ ಮುಖೇನ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.

ರೈತರ ಜೊತೆ ನಡೆದ ಸಂವಾದದಲ್ಲಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ವಿ.ಎನ್.ಭಟ್ ಮಾತನಾಡಿ, ಅಡಿಕೆಗೆ ಉತ್ತಮ ದರ ಬಂದಷ್ಟೇ ಬೇಗ ಇಳಿಕೆಯಾಗುತ್ತಿದೆ. ಈ ಮೂಲಕ ಕ್ಯಾಂಪ್ಕೋ ರೈತರ ಸಮಸ್ಯೆ ಬಗೆಹರಿಸುವಲ್ಲಿ ಹೆಚ್ಚಿನ ಪ್ರಯತ್ನ ಮಾಡಬೇಕು ಎಂದರು.

ಅಡಿಕೆ ಬೆಳೆಗಾರರಾದ ಜಿ.ಎನ್. ಗೌಡ ಮಾತನಾಡಿ, ಹೊನ್ನಾವರ ಭಾಗದಲ್ಲಿ ಸದಸ್ಯತ್ವ ಸಂಖ್ಯೆ ಹೆಚ್ಚಾಗಬೇಕು. ಯಾವ ಗುಣಮಟ್ಟದ ಅಡಿಕೆಯನ್ನು ಖರೀದಿ ಮಾಡುತ್ತೀರಿ ಎನ್ನುವುದು ತಿಳಿಸಬೇಕು ಎಂದರು. ಅಧಿಕಾರಿಗಳಿಂದ ರೈತರ ಬೆಳೆ ರಕ್ಷಣೆಗೆ ಇರುವ ತೊಡಕು, ಅಡಿಕೆ ಉತ್ಪನ್ನಗಳನ್ನು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ನಡೆಯಬೇಕಾದ ಸಂಶೋಧನೆ, ಗೊಬ್ಬರ, ಉತ್ತಮ ಇಳುವರಿ ಬರುವ ಸಸಿ ಪೊರೈಕೆ ಸೇರಿದಂತೆ ಹಲವು ವಿಷಯದ ಕುರಿತು ಸಂಸ್ಥೆಯ ನಿರ್ದೆಶಕರು ಹಾಗೂ ಅಧಿಕಾರಿಗಳೊಂದಿಗೆ ರೈತರು ಚರ್ಚೆ ನಡೆಸಿದರು.

ಕ್ಯಾಂಪ್ಕೋ ಸದಸ್ಯರು ತಿಳಿಸಿದ ಎಲ್ಲಾ ಸಮಸ್ಯೆಗಳ, ನೂನ್ಯತೆಗಳ ಬಗ್ಗೆ ಅವಲೋಕನ ನಡೆಸುತ್ತೇವೆ. ಗೊಬ್ಬರ ಪೂರೈಕೆ, ವಿವಿಧ ಸೌಲಭ್ಯಗಳ ಮಾಹಿತಿ, ಬೆಳೆ ಖರೀದಿ ಇರುವ ತೊಡಕು ನಿವಾರಣೆಯ ಸಮಸ್ಯೆಗಳನ್ನು ಸ್ಥಳದಲ್ಲೆ ಪರಿಹರಿಸಿದರು. ಗಂಭೀರ ವಿಷಯಗಳ ಬಗ್ಗೆ ಆಡಳಿತ ಮಂಡಳಿಯಲ್ಲಿ ಚರ್ಚೆಮಾಡಿ ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಕ್ಯಾಂಪ್ಕೋ ನಿಯಮಿತ ಮಂಗಳೂರು ಇದರ ಅಧ್ಯಕ್ಷ  ಎ. ಕಿಶೋರ್ ಉತ್ತರಿಸಿದರು.

300x250 AD

ವಾರದಲ್ಲಿ ಎರಡು ದಿನ ಪಟ್ಟಣದ ಹೃದಯಭಾಗದಲ್ಲಿ ಅಡಿಕೆ ಖರೀದಿಸಲು ಬದ್ದರಿದ್ದೇವೆ. ಗ್ರಾಹಕರು ಹಲವು ಸಂಸ್ಥೆಗಳೊಂದಿಗೆ ವ್ಯವಹಾರ ಮಾಡುವ ಬದಲು ಯಾವುದಾದರೂ ಒಂದು ಸಂಸ್ಥೆಯಲ್ಲಿ ವಹಿವಾಟು ನಡೆಸುವ ಧ್ರಡ ನಿರ್ಧಾರ ಮಾಡಿದಾಗ ಮಾತ್ರ ಅಡಿಕೆಗೆ ಉತ್ತಮ ಧಾರಣೆ ನೀಡಲು ಸಾಧ್ಯವಾಗಲಿದೆ. ಹೊನ್ನಾವರ ಭಾಗದಲ್ಲಿ 9 ಸಾವಿರ ಸದಸ್ಯರಿದ್ದಾರೆ. ಅದರಲ್ಲಿ 7 ಸಾವಿರ ಸಕ್ರೀಯರಲ್ಲದ ಸದಸ್ಯರಿದ್ದು ಅದರಲ್ಲಿ ಕೇವಲ 2ಸಾವಿರ ಸದಸ್ಯರು ಮಾತ್ರ ಸಕ್ರೀಯರಿದ್ದಾರೆ. ಸಕ್ರೀಯರಲ್ಲದ‌ ಸದಸ್ಯರನ್ನು  ಸಕ್ರೀಯರನ್ನಾಗಿಸುವ ಜತೆಗೆ ಸದಸ್ಯರಿಗೆ ಬೆಂಬಲ ನೀಡುತ್ತೇವೆ ಎಂದರು.

     ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ.ವಿ ಸತ್ಯನಾರಾಯಣ ಪ್ರಾಸ್ತವಿಕವಾಗಿ ಮಾತನಾಡಿ 1973ರಲ್ಲಿ ರೈತರ ಬೆನ್ನೆಲುಬಾಗಿ ನಿಲ್ಲುವ ಉದ್ದೇಶದಿಂದ ಆರಂಭವಾಗಿ, ಮೂಲ ಉದ್ದೇಶಗಳಿಗೆ ದಕ್ಕೆ ಉಂಟಾಗದೇ ಕೆಲಸ ಮಾಡುತ್ತಾ ಬಂದಿದೆ. 16 ಅಡಿಕೆ ಖರೀದಿ ಕೇಂದ್ರ, 12 ಚಾಕಲೇಟ್ ಉತ್ಪನ್ನ, 32 ಉಪಕೇಂದ್ರದ ಮೂಲಕ 3300 ಕೋಟಿಯಷ್ಟು ವ್ಯವಹಾರ ಮಾಡುತ್ತಾ ಬಂದಿದೆ ಎಂದು ಸಂಸ್ಥೆಯ ಕಾರ್ಯವೈಖರಿ ವಿವರಿಸಿದರು.

     ಸಂಸ್ಥೆಯ ಜನರಲ್ ಮ್ಯಾನೇಜರ್ ರೇಷ್ಮಾ ಮಲ್ಯ ಯೋಜನೆಯಿಂದ ದೊರೆಯುವ ಸೌಲಭ್ಯ ವಿವರಿಸಿದರು.‌ ಕೃಷಿ ಅಧಿಕಾರಿ ಕೃಷ್ಣ ಗೊಬ್ಬರ ಹಾಗೂ ಕೃಷಿ ಉತ್ಪತ್ನಗಳ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಸಂಸ್ಥೆಯ ಕೃಷ್ಣಪ್ರಸಾದ, ಬಾಲಕೃಷ್ಣ ರೈ, ಮಹೇಶ ಚೌಟಾ, ಸುರೇಶ ಶೆಟ್ಟಿ, ಜಯಪ್ರಕಾಶ, ರಾಘವೇಂದ್ರ ಭಟ್, ಜಯರಾಮ ಶೆಟ್ಟಿ, ರತ್ನಾಕರ ಮತ್ತಿತರು ಇದ್ದರು. ಸಂಸ್ಥೆಯ ನಿರ್ದೇಶಕರಾದ ಶಂಭುಲಿಂಗ ಹೆಗಡೆ ನಡಗೋಡು ಸ್ವಾಗತಿಸಿ, ಸಂಸ್ಥೆಯ ಉಪಾಧ್ಯಕ್ಷ ಶಂಕರ ನಾರಾಯಣ ಭಟ್ ಖಂಡಿಗೆ ವಂದಿಸಿದರು.

Share This
300x250 AD
300x250 AD
300x250 AD
Back to top